
“ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ಕಲಾವಿದಿಕೆ ನವ್ಯ ನಾಟ್ಯ ಸಂಗಮ” ರವರು, ಯೋಗ ಮತ್ತು ನಾಟ್ಯ ವಿಷಯ ಕುರಿತಾದ ಕಾರ್ಯಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 28 ಜೂನ್ 2026 ರಂದು ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಆಯೋಜಿಸಿದ್ದರು, ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯೋಗಶ್ರೀ ವರ್ಧಮಾನ ಕಳಸೂರು, ಯೋಗ ಗುರು ಕಲಂದರ್ ಭಾಷ ಮತ್ತು ಯೋಗ ಪಟು ಮತ್ತು ಬಹು ವಿಶ್ವ ದಾಖಲೆ ಸಾಧಕಿ ಶ್ರೀಮತಿ ಅಂಬಿಕಾ ಸಿ ರವರುಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಯೋಗ ಮತ್ತು ನಾಟ್ಯ ಕುರಿತಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ಉಪನ್ಯಾಸಕ್ಕೆ ಆಗಮಿಸಿದ ಪೋಷಕರು ಮತ್ತು ಮಕ್ಕಳು ಬಹಳ ಆಸಕ್ತಿಯುತವಾಗಿ ಪಾಲ್ಗೊಂಡು ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡರು.
