ಬಿಎಸ್ ವೈ ವಿರುದ್ಧ ಎತ್ತಿಕಟ್ಟಲಾಗುತ್ತಿದೆಯಾ ವಿ.ಸೋಮಣ್ಣರನ್ನು?

ಬಿಎಸ್ ವೈ ವಿರುದ್ಧಎತ್ತಿಕಟ್ಟಲಾಗುತ್ತಿದೆಯಾ ವಿ.ಸೋಮಣ್ಣರನ್ನು?

ರಾಜಧಾನಿಯ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಪಕ್ಷಾಂತರಿ ಪಕ್ಷಿ ಎಂಬಂತೆ ಯಾವುದೇ ಪಕ್ಷದಿಂದ ನಿಂತರೂ ಎಂ ಎಲ್ ಎ ಆಗಿ ಗೆಲ್ಲುತ್ತಿರುವ ವಿ. ಸೋಮಣ್ಣ ಅವರು ಎಲ್ಲಾ ಜಾತಿಯ ಜನರ ಬೆಂಬಲ ಇರುವುದರಿಂದಲೇ ಗೆಲ್ಲುತ್ತಾ ಬರುತ್ತಿದ್ದಾರೆ ಮತ್ತು ಜನರಿಗೆ ಸ್ಪಂದಿಸಿ ಕೆಲಸವನ್ನು ಸಹ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರೇ ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕ ಎಂದು ಬ್ಯಾಟ್ ಬೀಸುತ್ತಲೆ ಬರುತ್ತಿರುವ ಸೋಮಣ್ಣ ಇತ್ತೀಚೆಗೆ ಅದ್ಯಾಕೋ ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡು ದೂರವಿದ್ದಂತೆ ಅವರ ಮಾತುಗಳೇ ವ್ಯಕ್ತಪಡಿಸುತ್ತವೆ.

ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿ ಎಸ್ ವೈ ವಿರೋಧಿಗಳು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಲಿಂಗಾಯತರ ವಿರುದ್ಧ ಲಿಂಗಾಯತರನ್ನು ರಾಜಕೀಯವಾಗಿ ತುಳಿಯಬೇಕೆಂಬಂತೆ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ತುಳಿಯಬೇಕೆಂದರೆ ಅದು ವಿ. ಸೋಮಣ್ಣ ಅವರನ್ನು ಎತ್ತಿಕಟ್ಟಿ ದರೆ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಬಿಟ್ಟಂತೆ ಮೇಲ್ನೋಟಕ್ಕೆ ಕಾಣುತ್ತೆ.

ಇದಕ್ಕೊಂದು ನಿದರ್ಶನ ಎಂಬಂತೆ ಮೈಸೂರು ಭಾಗದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಮಗ ವಿಜಯೇಂದ್ರ ಅವರನ್ನು ಸೋಲಿಸಬೇಕೆಂದು ಬಿ ಎಸ್ ವೈ ವಿರೋಧಿಗಳು ಕುತಂತ್ರ ಮಾಡಿದ್ದರು. ಆದರೆ ಇದರ ಸುಳಿವನ್ನು ಅರಿತ ಯಡಿಯೂರಪ್ಪ ವಿಜಯೇಂದ್ರ ನನ್ನು ಶಿಕಾರಿಪುರದಲ್ಲಿ ಟಿಕೆಟ್ ತಪ್ಪಿಸಿ ಈ ಕ್ಷೇತ್ರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬಿ ಎಸ್ ವೈ ವಿರೋಧಿಗಳು ಮಾಡುತ್ತಿರುವ ಹುನ್ನಾರ ಮಾಡುತ್ತಿದ್ದಾರೆ ಎಂದು ಯಾವುದೇ ಕಾರಣಕ್ಕೂ ವಿಜಯೇಂದ್ರ ವರುಣಾ ಕ್ಷೇತ್ರದಿಂದ ನಿಲ್ಲಲ್ಲ ಎಂದು ಘೋಷಿಸಿಯೆ ಬಿಟ್ಟರು.

ಇದರಿಂದ ಕಂಗಾಲಾಗಿರುವ ಬಿ ಎಸ್ ವೈ ವಿರೋಧಿಗಳು, ಜೆಡಿಎಸ್ ದೇವೇಗೌಡರೊಂದಿಗೆ ಗುಪ್ತವಾಗಿ ಮಾತನಾಡಿ ಯಡಿಯೂರಪ್ಪ ಗುಪ್ತವಾಗಿ ಸಿದ್ದರಾಮಯ್ಯ ಅವರೊಡನೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರ ಅವರನ್ನು ನಿಲ್ಲಿಸುತ್ತಿಲ್ಲ ಎಂದು ಬಿಜೆಪಿ ಹೈ ಕಮಾಂಡ್ ಗೆ ಹೇಳಿಸುವುದಕ್ಕಾಗಿಯೆ ಮತ್ತು ಪ್ರೀತಂ ಗೌಡ ಬದಲು ಬಿಜೆಪಿಯಿಂದ ಬೇರೆಯವರಿಗೆ ಟಿಕೆಟ್ ಕೊಡಿ, ಆಗ ನಮ್ಮ ಕುಟುಂಬದಲ್ಲಿ ಪ್ರೀತಂ ಗೌಡ ಹಾಕಿದ ಸವಾಲಿಂದ ಅಲ್ಲೋಲ ಕಲ್ಲೋಲ ಆಗಿರುವುದು ನಿಲ್ಲುತ್ತದೆ. ಎಂದು ಪ್ರಧಾನಿ ಮೋದಿ ಭೇಟಿ ಮಾಡಿ ತಿಳಿಸಲಿಕ್ಕೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದ್ದರಿಂದ ಈ ಮೊದಲು ಮೈಸೂರು ಭಾಗದಲ್ಲಿ ವಿ. ಸೋಮಣ್ಣ ನಿಲ್ಲಲು ಪ್ರಯತ್ನಿಸಿದಾಗ ಯಡಿಯೂರಪ್ಪ ತಡೆದಿದ್ದರು ಎಂದು ಬಿ ಎಸ್ ವೈ ವಿರೋಧಿಗಳು ಹೇಳುತ್ತಿದ್ದಾರೆ. ಆದ್ದರಿಂದ ಈ ಬಾರಿ ವರುಣಾ ಕ್ಷೇತ್ರದಿಂದ ವಿ. ಸೋಮಣ್ಣ ಅವರನ್ನು ನಿಲ್ಲಿಸಿ ಸಿದ್ದ ರಾಮಯ್ಯ ಅವರನ್ನು ಸೋಲಿಸುವ ಮೂಲಕ , ಪರೋಕ್ಷವಾಗಿ ಸಿದ್ದುಗೆ ಸಹಾಯ ಮಾಡುತ್ತಿದ್ದಾರೆ ಅಂತಲೇ ಅಂದುಕೊಂಡಿರುವ ಬಿ ಎಸ್ ವೈ ಅವರಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದಾರಂತೆ.

ಇದು ನಿಜವೇ ಆಗಿದ್ದಲ್ಲಿ ಬಿ ಎಸ್ ವೈ ವಿರೋಧಿಗಳಿಗೆ ತಾಕತ್ತಿದ್ದರೆ, ಜೆಡಿಎಸ್ ಪಕ್ಷದ ದೇವೇಗೌಡರ ಜೊತೆ ಗುಪ್ತವಾಗಿ ಕೈ ಜೋಡಿಸಿ ವಿ. ಸೋಮಣ್ಣ ಅವರನ್ನು ಗೆಲ್ಲಿಸಿ ಕೊಂಡು ಬರಲಿ.

ಈಗಾಗಲೇ ಟಿ.ವಿ. ಮಾಧ್ಯಮದಲ್ಲಿ ತೋರಿಸಿದಂತೆ ವಿ. ಸೋಮಣ್ಣ ಅವರ ಮಗ ಅರುಣ್ ಸೋಮಣ್ಣ ಕಾರಿನಲ್ಲಿ ಬಾಂಬ್ ಸಹಿತ, ಮಾರಣಾಂತಿಕ ಶಸ್ತ್ರಾಸ್ತ್ರಗಳು ಇದ್ದ ಬಗ್ಗೆ ಕಾರ್ ಸಮೇತ ಹಿಡಿದು ಸುದ್ದಿ ತೋರಿಸಿದ್ದರು. ಆದರೆ ಬಾಂಬ್ ಅಥವಾ ಮಾರಕಾಸ್ತ್ರ ತೋರಿಸಿರಲಿಲ್ಲ.

ಅದೇನೇ ಇರಲಿ ಯಡಿಯೂರಪ್ಪ ರ ವಿರುದ್ಧ ಜಿದ್ದಿಗೆ ಬಿದ್ದು ಬಿ.ಎಸ್.ವೈ ವಿರೋಧಿಗಳ ಮಾತು ಕೇಳಿಕೊಂಡು ವಿ. ಸೋಮಣ್ಣ ತಮ್ಮ ಹಿತ್ತಾಳೆ ಕಿವಿ ಕೊಟ್ಟಲ್ಲಿ ಸಿದ್ದು ವಿರುದ್ಧ ಸೋಲು ಗ್ಯಾರಂಟಿ.

ಇವರ ಬದಲು ಬಿ ಎಸ್ ವೈ ವಿರೋಧಿಗಳು ಆರ್ ಎಸ್ ಎಸ್ ನ ಸಂತೋಷ್ ಜಿ ಅವರನ್ನೇ ನಿಲ್ಲಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಮುಖ್ಯಮಂತ್ರಿ ಕನಸು ಈಡೇರಿಸಿ ಕೊಳ್ಳಬಹುದಲ್ಲವೆ

ಒಂದಂತೂ ಸತ್ಯ ವಿ. ಸೋಮಣ್ಣ ಯಾವತ್ತೂ ಅವರ ಕ್ಷೇತ್ರಕ್ಕೆ ಮೀಸಲಾದ ವ್ಯಕ್ತಿಯೇ ಹೊರತು, ಯಡಿಯೂರಪ್ಪ ಅಥವಾ ವಿಜಯೇಂದ್ರ ಈ ರೀತಿಯಲ್ಲಿ ರಾಜ್ಯ ಮಟ್ಟದ ನಾಯಕರಲ್ಲ. ಇವರ ಮುಖ ಇಟ್ಟುಕೊಂಡು ಹೋದರೆ ರಾಜ್ಯದಲ್ಲಿ ಬಿಜೆಪಿ ಗೆ ವೋಟ್ ಹಾಕುವ ಸಾಧ್ಯತೆಗಳೇ ಇಲ್ಲ. ಈ ವಾಸ್ತವ ಅರಿತು ಸೋಮಣ್ಣ ಬಿಎಸ್ವೈ ವಿರೋಧಿಗಳ ಮಾತಿಗೆ ಹಿತ್ತಾಳೆ ಕಿವಿ ಕೊಟ್ಟು ಯಡಿಯೂರಪ್ಪ ವಿರುದ್ದ ಕೇಡು ಬಯಸಿ ಮತ್ತಷ್ಟು ನಿಮ್ಮ ರಾಜಕೀಯ ಹಿನ್ನಡೆ ಪಡೆಯುವ ಅವಕಾಶಕ್ಕೆ ಎಡೆಮಾಡಿ ಕೊಟ್ಟರೆ ನಿಮ್ಮ ರಾಜಕೀಯ ನಾಶಕ್ಕೆ ಬಿ ಎಸ್ ವೈ ವಿರೋಧಿಗಳೇ ಕಾರಣರಾಗುತ್ತಾರೆ ಎಚ್ಚರ.

ರಾಜಕೀಯವಾಗಿ ವಿನಾಶದ ಹಂಚಿನಲ್ಲಿದ್ದ ವಿ.ಸೋಮಣ್ಣ ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತಂದು ಎಂ ಎಲ್ ಸಿ ಮಾಡಿ ಮಂತ್ರಿ ಮಾಡಿದವರೇ ಬಿ.ಎಸ್. ಯಡಿಯೂರಪ್ಪ. ಈ ಕೃತಜ್ಞತೆಯನ್ನು ಮರೆತು ಯಡಿಯೂರಪ್ಪರ ಬಿಜೆಪಿ ವಿರೋಧಿಗಳ ಮಾತಿಗೆ ಸೋಮಣ್ಣ ತಮ್ಮ ಹಿತ್ತಾಳೆ ಕಿವಿಕೊಟ್ಟು *ಕೃತಘ್ನ” ಆಗಬಾರದು.

kanews

kanews

Leave a Reply

Your email address will not be published. Required fields are marked *